Surprise Me!

CCTV VIDEO: ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವೃದ್ದೆಯ ಚಿನ್ನದ ಸರ ಕದ್ದೊಯ್ದ ಖದೀಮ

2026-02-18 29 Dailymotion

ತುಮಕೂರು: ಖದೀಮನೊಬ್ಬ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವೃದ್ದೆಯ ಚಿನ್ನದ ಸರ ಕದ್ದು ಪರಾರಿಯಾಗಿರುವ ಘಟನೆ ತುಮಕೂರಿನ ಕ್ಯಾತಸದಂದ್ರದ ಮೈದಾಳ ರಸ್ತೆಯಲ್ಲಿ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಚಿಲ್ಲರೆ ಅಂಗಡಿ ನಡೆಸುತ್ತಿದ್ದ ಪಾರ್ವತಮ್ಮ ಎಂಬ ವೃದ್ದೆಯ ಸರಗಳ್ಳತನವಾಗಿದೆ. ಇದೇ ತಿಂಗಳ 15ರಂದು ಬೆಳಗ್ಗೆ ಘಟನೆ ನಡೆದಿದೆ. ಬೆಳ್ಳಂಬೆಳಗ್ಗೆ ಅಂಗಡಿ ಬಾಗಿಲು ತೆರೆದಿದ್ದ ಪಾರ್ವತಮ್ಮನ ಬಳಿ ಗುಟ್ಕಾ ಸಿಗರೇಟ್ ಕೇಳುವ ನೆಪದಲ್ಲಿ ಬಂದ ಖದೀಮ, ಕೊರಳಲ್ಲಿದ್ದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದಾನೆ.

ಕೈಹಾಕಿ ಎಳೆದ ರಭಸಕ್ಕೆ ಸರ ತುಂಡಾಗಿದೆ. ಹೀಗಾಗಿ, ಅರ್ಧ ಸರವನ್ನು ಮಾತ್ರ ಕದ್ದೊಯ್ದಿದ್ದಾನೆ. ಕಳ್ಳ ದಾಳಿ ಮಾಡುತ್ತಿದ್ದಂತೆ‌ ವೃದ್ದೆಯು ಕೂಗಿಕೊಂಡಿದ್ದು, ಬಿದ್ದು ಒದ್ದಾಡಿದರೂ ಆತ ಬಿಟ್ಟಿಲ್ಲ. ಘಟನೆ ಸಂಬಂಧ ಕ್ಯಾತಸಂದ್ರ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ಟಿವಿ ಕದ್ದ ಆರೋಪಿ 28 ವರ್ಷಗಳ ಬಳಿಕ ಸೆರೆ: ಟಿವಿ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್.ಪಿ.ಆರ್ ಪ್ರಕರಣದ ಆರೋಪಿಯನ್ನು ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

1998ರ ಸೆ.23ರಂದು ದಾವಣಗೆರೆಯ ರಂಗನಾಥ ಬಡಾವಣೆ ನಿವಾಸಿ ರುದ್ರಯ್ಯ ಅವರು ತಮ್ಮ ಮನೆಯಲ್ಲಿದ್ದ 2,000 ರೂ. ಬೆಲೆಬಾಳುವ ಟಿವಿ ಕಳ್ಳತನ ಆಗಿರುವ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ:  ಹಾವೇರಿ: ಅಣ್ಣನ ಮನೆಗೆ ಕನ್ನ ಹಾಕಿದ್ದ ತಮ್ಮ, ಪ್ರಕರಣ ನಡೆದು ಮೂರೇ ದಿನಗಳಲ್ಲಿ ಆರೋಪಿಯ ಬಂಧನ