Surprise Me!

ಮಧ್ಯಪ್ರಾಚ್ಯ ಯುದ್ಧ: ಇರಾನ್ ವಿರುದ್ಧ ದಾಳಿ, ಭಾರತ ಸಿಸಿಎಸ್ ಸಭೆ ಮತ್ತು ಲೆಬನಾನ್‌ನಲ್ಲಿ ಕ್ಷಿಪಣಿ ದಾಳಿ

2026-04-01 0 Dailymotion

ಮಧ್ಯಪ್ರಾಚ್ಯದಲ್ಲಿ ಯುದ್ಧ ಸಂಘರ್ಷ ತೀವ್ರಗೊಳ್ಳುತ್ತಿದ್ದು, ಅಮೇರಿಕಾ ಇರಾನ್ ವಿರುದ್ಧ ನಿರಂತರ ದಾಳಿ ನಡೆಸುತ್ತಿದೆ. ಹಾರ್ಮೂಸ್ ಜಲಸಂಧಿ ವಶಕ್ಕೆ ಭೂದಾಳಿಯ ಚಿಂತನೆ ನಡೆಯುತ್ತಿದೆ. ಭಾರತದ ಕೇಂದ್ರ ಸರ್ಕಾರ ಸಿಸಿಎಸ್ ಸಭೆ ನಡೆಸಿದ್ದು, ರಾಜನಾಥ್ ಸಿಂಗ್, ಅಮಿತ್ ಶಾ, ಜೈಶಂಕರ್, ನಿರ್ಮಲಾ ಸೀತಾರಾಮನ್ ಸೇರಿ ಹಲವರು ಭಾಗವಹಿಸಿದ್ದಾರೆ. ಕಚ್ಚಾ ತೈಲ ಸರಬರಾಜು ಮತ್ತು ಅನಿಲ ಮೇಲೆ ಯುದ್ಧದ ಪರಿಣಾಮ ಬೀರಲಿದ್ದು, ಭಾರತ ತಟಸ್ಥ ನಿಲುವಿನಿಂದ ನಷ್ಟ ತಡೆಯಲು ಪ್ರಯತ್ನಿಸುತ್ತಿದೆ. ಅಮೇರಿಕಾ ಸಾವಿರಾರು ಸೈನಿಕರನ್ನು ಸಿದ್ಧಪಡಿಸಿದ್ದು, ಇರಾನ್ ತಕ್ಕ ಪ್ರತ್ಯುತ್ತರ ನೀಡುವ ಎಚ್ಚರಿಕೆ ನೀಡಿದೆ. ಲೆಬನಾನ್‌ನ ಬೈರುತ್ ಜನಾಹ್ ಪ್ರದೇಶದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದ್ದು, 5 ನಾಗರಿಕರು ಸಾವನ್ನಪ್ಪಿ 21 ಜನರು ಗಾಯಗೊಂಡಿದ್ದಾರೆ.