Surprise Me!

ರಾಮನಗರ: ಮನೆಗೆ ನುಗ್ಗಿ ಕಾಡಾನೆಗಳ ಉಪಟಳ

2026-04-17 19 Dailymotion

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕಾಡಾನೆ ದಾಳಿ ನಿಲ್ಲುತ್ತಿಲ್ಲ. ರೈತರ ಬೆಳೆ ಹಾನಿ ಮಾಡುತ್ತಿದ್ದ ಕಾಡಾನೆಗಳು ಇದೀಗ ಜನವಸತಿ ಸ್ಥಳಗಳಿಗೆ ನುಗ್ಗುತ್ತಿವೆ.

ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ಎರಡು ಕಾಡಾನೆಗಳು ಮನೆಗೆ ನುಗ್ಗಿವೆ. ಗ್ರಾಮದ ದೊಡ್ಡೇಗೌಡ ಎಂಬವರ ಮನೆಗೆ ಬಂದಿರುವ ಎರಡು ಕಾಡಾನೆಗಳು ಮನೆ ಮುಂಭಾಗ ಬೆಳೆದಿದ್ದ ತೆಂಗಿನ ಮರದಲ್ಲಿದ್ದ ಎಳನೀರು ಎಳೆದು ಹಾಕಿ ಹಾನಿ ಮಾಡಿವೆ.

ಘಟನೆಯಿಂದ ಸುತ್ತಮುತ್ತಲ ಮನೆಯವರು ಆತಂಕದಲ್ಲಿದ್ದಾರೆ. ಪದೇ ಪದೇ ಕಾಡಾನೆಗಳು ದಾಳಿ ಮಾಡುತ್ತಿದ್ದರೂ ಕೂಡ ಅವುಗಳನ್ನು ಶಾಶ್ವತವಾಗಿ ಕಾಡಿಗಟ್ಟುವ ಕೆಲಸ ಮಾತ್ರ ಆಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿ, ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಇದೇ ರೀತಿ, ಇತ್ತೀಚಿಗೆ ಆನೇಕಲ್​​​ ಸುತ್ತಮುತ್ತ ಕಾಡಾನೆಗಳು ಪ್ರತ್ಯಕ್ಷವಾಗಿದ್ದವು. ದೊಡ್ಡಕೆರೆಯ ಎಸ್ಟೀಪಿ ಪ್ಲಾಂಟ್ ಬಳಿ ಮೂರು ಆನೆಗಳು ಪೊದೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ಸೆರೆಯಾಗಿತ್ತು.

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಹೋಂ ಸ್ಟೇಗಳಿಗೂ ಆನೆಗಳು ನುಗ್ಗಿದ್ದವು. 

ಇದನ್ನೂ ಓದಿ: ಕೊಟ್ಟಿಗೆಹಾರ ಹೋಂ ಸ್ಟೇ ಮುಂದೆ ಕಾಡಾನೆ ಸಂಚಾರ: ಸಿಸಿಟಿವಿಯಲ್ಲಿ ದೃಶ್ಯ ಸೆರೆ