Surprise Me!

ಬಾಗಲಕೋಟೆಯಲ್ಲಿ ಭೀಕರ ಕೊಲೆ: ಚಾಕುವಿನಿಂದ ಇರಿದು, ಕಾರಿಗೆ ಬೆಂಕಿ ಹಚ್ಚಿ ಸುಟ್ಟ ದುಷ್ಕರ್ಮಿಗಳು

2026-04-21 0 Dailymotion

ಬಾಗಲಕೋಟೆಯಲ್ಲಿ ನಡು ರಸ್ತೆಯಲ್ಲಿ ಭೀಕರ ಕೊಲೆ ಪ್ರಕರಣ ನಡೆದಿದೆ. ಹಳೆಯ ವೈಷಮ್ಯ ಹಾಗೂ ಪತ್ನಿಯ ಜೊತೆ ಅನೈತಿಕ ಸಂಬಂಧದ ಆರೋಪದ ಹಿನ್ನೆಲೆಯಲ್ಲಿ, ಸದಾಶಿವನ ಸಹಚರ ರವಿ ನಾವಿ ಎಂಬಾತ ಸೋಮು ಎಂಬುವವನ ಮೇಲೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಸೋಮು ಹೊಸ ಕಾರಿನಲ್ಲಿ ಊರಿಗೆ ಬರುತ್ತಿದ್ದಾಗ ದಾಳಿ ಮಾಡಲಾಗಿದೆ. ಕನ್ನೋಳ್ಳಿ ಗ್ರಾಮದಲ್ಲಿ ಆತನ ಮೃತದೇಹ ಹಾಗೂ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಸೋಮು ಮತ್ತು ಕಾರು ಸಂಪೂರ್ಣ ಸುಟ್ಟು ಕರಕಲಾಗಿವೆ. ಈ ಘಟನೆ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.