Surprise Me!

ಭೀಮಾ ತೀರದಲ್ಲಿ ಜಮೀನು ವಿವಾದ: ನಿರಾಳೆ ಕುಟುಂಬದ ಆರು ಮಂದಿ ಬರ್ಬರ ಹತ್ಯೆ

2026-05-29 0 Dailymotion

ಕರ್ನಾಟಕದ ಭೀಮಾ ತೀರದ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ನಿರಾಳೆ ಕುಟುಂಬದ ಆರು ಮಂದಿಯನ್ನು ಗೂಳಗಿ ಕುಟುಂಬ ಗುಂಡಿಟ್ಟು ಮತ್ತು ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. ರೇವಣ್ಣ ಸಿದ್ಧಪ್ಪ ನಿರಾಳೆ, ದೊಡ್ಡಪ್ಪ ನಿರಾಳೆ ಸೇರಿದಂತೆ ಒಂದೇ ಕುಟುಂಬದ ಆರು ಜನರು ಸಾವನ್ನಪ್ಪಿದ್ದಾರೆ. ಭೀಮಾ ತೀರದ ಹತ್ಯಾಕಾಂಡದಲ್ಲಿ ಹತನಾದ ಮಾಣಿಕಪ್ಪ ಮಾಸ್ತರ್ ಸಂಬಂಧಿ ಅಪ್ಪು ಗೌಡ ಈ ಹತ್ಯೆಗಳನ್ನು ಎಸಗಿದ್ದಾನೆ ಎಂದು ತಿಳಿದುಬಂದಿದೆ. ಕಂಟ್ರಿಮೇಡ್ ಪಿಸ್ತೂಲು ಮತ್ತು ಮಚ್ಚು ಬಳಸಿ ಈ ಹತ್ಯೆ ನಡೆದಿದ್ದು, ಎಸ್ಪಿ ಲಕ್ಷ್ಮಣ ನಿಂಬರಗಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.