Surprise Me!

ಅಯೋಧ್ಯೆ ಶ್ರೀರಾಮ ಮಂದಿರದ ದೇಣಿಗೆ ಲೂಟಿಯಿಂದ ನೋವಾಗಿದೆ: ಕೆ.ಎಸ್.ಈಶ್ವರಪ್ಪ

2026-06-26 0 Dailymotion

ಶಿವಮೊಗ್ಗ: ಅಯೋಧ್ಯೆ ರಾಮ ಮಂದಿರದ ದೇಣಿಗೆ ಲೂಟಿಯಿಂದ ರಾಮ ಭಕ್ತರಿಗೆ ಆಘಾತವಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು. ನಗರದ ಪ್ರೆಸ್ ಟ್ರಸ್ಟ್ ಭವನದಲ್ಲಿಂದು ಮಾತನಾಡಿದ ಅವರು, 500 ವರ್ಷದ ಹಿಂದೆ ಬಾಬರ್ ಶ್ರೀರಾಮ ಮಂದಿರವನ್ನು ಕೆಡವಿ ಬಾಬರಿ ಮಸೀದಿ ಕಟ್ಟಿದ್ದ. ಇದೀಗ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಿದೆ. ರಾಮ ಭಕ್ತರು ನೀಡಿದ ಸಾವಿರಾರು ಕೋಟಿ ದೇಣಿಗೆಯಿಂದ ಮಂದಿರ ನಿರ್ಮಾಣವಾಗಿದೆ. ಈ ಘಟನೆಯಿಂದ ನಮಗೆ ಬಹಳ ನೋವಾಗಿದೆ. ಲೂಟಿಕೋರರನ್ನು ಬಂಧಿಸಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಮಂದಿರದ ಸಿಸಿಟಿವಿ ಕ್ಯಾಮರಾಗಳನ್ನು ತಿರುಚಲಾಗಿದೆ. 200 ಬೆಳ್ಳಿಯ ಇಟ್ಟಿಗೆಗಳು, ಬಂಗಾರ ನಾಪತ್ತೆಯಾಗಿದೆ. ಈ ವಿಚಾರವನ್ನು ಕೇಂದ್ರ ಸರ್ಕಾರ ಹಗುರವಾಗಿ ತೆಗೆದುಕೊಂಡಿಲ್ಲ. ರಾಮ ಮಂದಿರವನ್ನು ವಿರೋಧಿಸಿದ್ದವರು ಇಂದು ಲೂಟಿ ಬಗ್ಗೆ ಮಾತನಾಡುತ್ತಿರುವುದು ಬಹಳ ಸಂತೋಷ ತಂದಿದೆ ಎಂದರು.

ಪುಣ್ಯಕ್ಷೇತ್ರದ ಮೇಲಿರುವ ನಂಬಿಕೆ ಕೆಡಿಸುವ ಪ್ರಯತ್ನ ನಡೆದಿದೆ. ಆದ್ದರಿಂದ ಅಕ್ರಮ ನಡೆಸಿದವರನ್ನು ಕೂಡಲೇ ಬಂಧಿಸಬೇಕು. ಮನೆಯಲ್ಲಿ ಯಾರೋ ಒಬ್ಬ ಕಳ್ಳತನ ಮಾಡಿದ್ರೆ ಇಡೀ ಕುಟುಂಬವನ್ನೇ ದೂಷಿಸಲು ಸಾಧ್ಯವಿಲ್ಲ. ಅದೇ ರೀತಿ ರಾಮ ಮಂದಿರ ವಿಚಾರದಲ್ಲಿ ಆರ್​​ಎಸ್​ಎಸ್, ಬಿಜೆಪಿಯನ್ನು ಎಳೆದು ತರುವುದು ಸರಿಯಿಲ್ಲ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆ ಆಗಲೇಬೇಕು ಎಂದರು. ಈ ವೇಳೆ ಕೆ.ಈ.ಕಾಂತೇಶ್ ಸೇರಿ ಮತ್ತಿತರರಿದ್ದರು.

ಇವುಗಳನ್ನೂ ಓದಿ:

  • ಅಯೋಧ್ಯಾ ರಾಮ ಮಂದಿರದಲ್ಲಿ ದೇಣಿಗೆ ದುರುಪಯೋಗ ಆರೋಪ: ಎಂಟು ಆರೋಪಿಗಳ ಬಂಧನ
  • ಅಯೋಧ್ಯೆ ಶ್ರೀರಾಮ ಮಂದಿರದ ದೇಣಿಗೆ ಪ್ರಕರಣ: ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ