Surprise Me!

ನವಳಗುಂದ: ಶಾಸಕರ ಕಚೇರಿ ಮುಂದೆ ರೈತ ಆತ್ಮಹತ್ಯೆ ಯತ್ನ

2026-06-29 0 Dailymotion

ನವಳಗುಂದ ತಾಲುಕಿನ ಪಡೆಸುರು ಗ್ರಾಮದ ರೈತ ಮಾಹಂತೇಶ್ ಅವರು ಆಸ್ತಿ ವಿಚಾರದ ಸಮಸ್ಯೆಯಿಂದ ಬೇಸತ್ತು ಶಾಸಕ ಕೋನರೇಡ್ಡಿ ಅವರ ಕಚೇರಿ ಮುಂದೆ ಆತ್ಮಹತ್ಯೆಗೆ ಯತ್ನ ನಡೆಸಿದ್ದಾರೆ. ಚಾಕುವಿನಿಂದ ತಮ್ಮನ್ನು ತಾವು ಹತ್ತಕ್ಕೂ ಹೆಚ್ಚು ಬಾರಿ ಚುಚ್ಚಿಕೊಂಡಿದ್ದಾರೆ. ಮಾರಾಟ ಮಾಡಿದ ಜಮೀನಿನ ಹಣ ಸಿಗದ ಕಾರಣ ಮತ್ತು ಆಸ್ತಿ ವಿಚಾರದಲ್ಲಿ ನ್ಯಾಯ ಸಿಗದ ಕಾರಣ ರೈತ ಶಾಸಕರ ಗಮನಕ್ಕೆ ತರಲು ಕಚೇರಿ ಮುಂದೆ ಈ ಕ್ರಮ ಕೈಗೊಂಡಿದ್ದಾರೆ. ಕಳೆದ ಮೂರು ತಿಂಗಳಿನಿಂದ ಸಮಸ್ಯೆ ಬಗೆಹರಿಯದ ಕಾರಣ ಈ ಘಟನೆ ನಡೆದಿದ್ದು, ರೈತರ ಸ್ಥಿತಿ ಗಂಭೀರವಾಗಿದೆ.