Surprise Me!

ಶಿವಮೊಗ್ಗ UNI ಕಚೇರಿಗೆ ಬೆಂಕಿ: ಬೆಳಗ್ಗೆ ಬಾಗಿಲು ತೆರದಾಗಲೇ ಘಟನೆ ಬೆಳಕಿಗೆ

2026-06-30 2 Dailymotion

ಶಿವಮೊಗ್ಗ: ನಗರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಗ್ನಿ ಅವಘಡ ಉಂಟಾಗಿ, ಬ್ಯಾಂಕ್​ಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಗಾಹುತಿ ಆಗಿರುವ ಘಟನೆ ಬಿ.ಹೆಚ್.ರಸ್ತೆಯ ಕಾನ್ವೆಂಟ್ ವೃತ್ತದ ಕಾಸರವಳ್ಳಿ ಕಾಂಪ್ಲೆಕ್ಸ್​ನಲ್ಲಿ ಸೋಮವಾರ ರಾತ್ರಿ ನಡೆದಿದೆ.

ನಿನ್ನೆ ರಾತ್ರಿ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿದ್ದು, ನಂತರ ಅದೇ ಸಂಪೂರ್ಣ ನಂದಿ ಹೋಗಿದೆ.‌ ಕಳೆದ ಮೂರು ದಿನಗಳಿಂದ ಬ್ಯಾಂಕ್ ರಜೆ ಇದ್ದು, ಇಂದು ಬ್ಯಾಂಕ್ ತೆರೆದಾಗ ಬ್ಯಾಂಕ್​ನ ಒಳಗಡೆ ಸಂಪೂರ್ಣ ಹೊಗೆಯಿಂದ ಕಪ್ಪಾಗಿತ್ತು.‌ ಬ್ಯಾಂಕ್ ಸಿಬ್ಬಂದಿ ಬ್ಯಾಂಕ್ ತೆರೆದಾಗ ಘಟನೆ ಬೆಳಕಿಗೆ ಬಂದಿದೆ.

ನಂತರ ಪರಿಶೀಲನೆ ನಡೆಸಿದಾಗ ನಿನ್ನೆ ಅಥವಾ ಮೊನ್ನೆಯೇ ಶಾರ್ಟ್ ಸರ್ಕ್ಯೂರ್ಟ್​ನಿಂದ ಬೆಂಕಿ ಹೊತ್ತಿಕೊಂಡು ಉರಿದಿದೆ. ಇದರಿಂದ ಬ್ಯಾಂಕ್​ನ ಪೀಠೋಪಕರಣಗಳು ಸೇರಿದಂತೆ ಕಂಪ್ಯೂಟರ್, ಎಸಿ ಸಂಪೂರ್ಣ ಸುಟ್ಟು ಕರಕಲಾಗಿದೆ. 

ಬೆಂಕಿ ಹೂತ್ತಿಕೊಂಡು ಉರಿದರೂ, ಹೊರಗೆ ಹೊಗೆ ಅಥವಾ ಬೆಂಕಿ‌ ಕಾಣಿಸಿಕೊಳ್ಳದ ಕಾರಣದಿಂದ ಬೆಂಕಿ ಬಿದ್ದಿರುವುದು ಯಾರಿಗೂ ತಿಳಿಯಲಿಲ್ಲ. ಆದರೆ ಬೆಳಗ್ಗೆ ಬ್ಯಾಂಕ್ ತೆರೆದಾಗ ಬ್ಯಾಂಕ್ ಒಳಗಡೆ ಸಂಪೂರ್ಣ ಕಪ್ಪಾಗಿತ್ತು. ಬ್ಯಾಂಕ್ ಮ್ಯಾನೇಜರ್ ಅಗ್ನಿಶಾಮಕ ದಳದವರಿಗೆ ವಿಷಯ ತಿಳಿಸುತ್ತಿದ್ದಂತೆಯೇ ಬ್ಯಾಂಕ್‌ಗೆ ಬಂದಿದ್ದಾರೆ. ಅಲ್ಲದೇ ಕೋಟೆ ಪೊಲೀಸರು ಸಹ ಆಗಮಿಸಿ‌ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಚಿಗಟೇರಿ ಜಿಲ್ಲಾಸ್ಪತ್ರೆಯ ಆಪರೇಷನ್ ಥಿಯೇಟರ್​ನಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ