Surprise Me!

ಬೆಂಗಳೂರು ಶಾಲೆಯಲ್ಲಿ ಬಾಲಕನ ಅನುಮಾನಾಸ್ಪದ ಸಾವು: ದೈಹಿಕ ಶಿಕ್ಷಕನ ವಿರುದ್ಧ ಕೊಲೆ ಕೇಸ್

2026-07-09 0 Dailymotion

ಬೆಂಗಳೂರಿನ ಸ್ಟರ್ಲಿಂಗ್ ವಸತಿ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿ ಗುರು ಕಿರಣ್ (13) ಅನುಮಾನಾಸ್ಪದ ಸಾವಿಗೆ ಸಂಬಂಧಿಸಿ ದೈಹಿಕ ಶಿಕ್ಷಕ ನಾರಾಯಣ್ ಮತ್ತು ಶಾಲೆಯ ಆಡಳಿತ ಮಂಡಳಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಬೆಳಿಗ್ಗೆ ಜಾಗಿಂಗ್ ವೇಳೆ ಬಾಲಕ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ದೈಹಿಕ ಶಿಕ್ಷಕರು ಸ್ಟೀಲ್ ರಾಡ್‌ನಿಂದ ಹೊಡೆದ ಕಾರಣ ಮೃತಪಟ್ಟಿದ್ದಾನೆ ಎಂದು ಸ್ನೇಹಿತರು ಮತ್ತು ಕುಟುಂಬ ಆರೋಪಿಸಿದ್ದಾರೆ. ಶಿಕ್ಷಕ ನಾರಾಯಣ್‌ರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಶಾಲೆ ಮತ್ತು ಮೈದಾನದಲ್ಲಿ CCTV ಇಲ್ಲದಿರುವುದು ತನಿಖೆಗೆ ತೊಡಕಾಗಿದೆ. ಮರಣೋತ್ತರ ಪರೀಕ್ಷೆ ನಡೆದಿದ್ದು, ಹಿಸ್ಟೋಪಾಥಲಾಜಿಕಲ್ ವರದಿಗಾಗಿ ಕಾಯಲಾಗುತ್ತಿದೆ. BNS ಸೆಕ್ಷನ್ 103 ಅಡಿ ಕೊಲೆ ಕೇಸ್ ದಾಖಲಾಗಿದೆ.