ಕಾಲು ಜಾರಿ ತೆರೆದ ಬಾವಿಗೆ ಬಿದ್ದ ಮೂವರ ದುರ್ಮರಣ ಸಂಭವಿಸಿದೆ. ಒಂಬತ್ತನೇ ತರಗತಿ ವಿದ್ಯಾರ್ಥಿಗಳಾದ ಸಾಕ್ಷಿ ಮತ್ತು ರಕ್ಷಿತ ಬಾವಿಗೆ ಬಿದ್ದರು. ಮಕ್ಕಳನ್ನು ರಕ್ಷಿಸಲು ಬಾವಿಗೆ ಹಾರಿದ ತಂದೆ ಸಾಬಣ್ಣ ಕೂಡ ಮೃತಪಟ್ಟಿದ್ದಾರೆ. ತೆಪ್ಪದ ಮೂಲಕ ಮಕ್ಕಳ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ತಂದೆ ಸಾಬಣ್ಣ ಅವರ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.