ಯಮರಾಜ ನಗರದ ಹನೂರು ಶೂಟ್ಔಟ್ ಪ್ರಕರಣದಲ್ಲಿ ಹೊಸ ತಿರುವು ಬಂದಿದೆ. ಎನ್ಕೌಂಟರ್ನಲ್ಲಿ ಮೃತಪಟ್ಟ ಮೂವರ ವಸ್ತ್ರದಲ್ಲಿ ಪ್ರೈಮರ್ಗಳು ಪತ್ತೆಯಾಗಿದ್ದು, ಅವರು ರೈತರಲ್ಲ ಬೇಟೆಗಾರರು ಎಂಬ ಸಾಕ್ಷ್ಯಗಳು ಬೆಳಕಿಗೆ ಬಂದಿವೆ. ಸುಮಾರು 10-15 ಅಡಿ ದೂರದಿಂದ ಶೂಟ್ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರು ಪ್ರಾಣಿ ಬೇಟೆಗೆ ಹೋಗಿದ್ದ ಸಾಧ್ಯತೆ ಪುಷ್ಟಿಗೊಂಡಿದೆ. ಇಷ್ಟು ದಿನ 'ನಾವು ರೈತರು, ಬೇಟೆಗಾರರಲ್ಲ' ಎಂದು ಕುಟುಂಬಸ್ಥರು ವಾದಿಸುತ್ತಿದ್ದರು. ಆದರೆ ಸಿಕ್ಕ ಸಾಕ್ಷ್ಯಗಳು ಬೇರೆಯದೇ ಕಥೆ ಹೇಳುತ್ತಿವೆ. ಈ ಪ್ರಕರಣದಲ್ಲಿ ಇನ್ನು ಯಾವ ರೀತಿಯ ತಿರುವುಗಳು ಬರಲಿವೆ ಎಂಬುದನ್ನು ನೋಡಬೇಕಿದೆ.