ಧಾರವಾಡದಲ್ಲಿ ವೈದ್ಯ ಡಾಕ್ಟರ್ ಕಿರಣ್ ಅವರನ್ನು ಅನಸ್ತೇಶಿಯಾ ಇಂಜೆಕ್ಷನ್ ನೀಡಿ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಲಾಗಿದೆ. ಮಕ್ಕಳಾಗದ ಕಾರಣ ಮೊದಲ ಪತ್ನಿಗೆ ಡಿವೋರ್ಸ್ ನೀಡಿ ಎರಡನೇ ಮದುವೆಯಾಗಿದ್ದ ಡಾಕ್ಟರ್ ರಕ್ತದ ಮಡುವಿನಲ್ಲಿ ಸಾವನ್ನಪ್ಪಿದ್ದಾರೆ. ಪಕ್ಕದ ಕೋಣೆಯಲ್ಲಿ 8 ವರ್ಷದ ಮಗು ರಕ್ತಸಿಕ್ತ ಸ್ಥಿತಿಯಲ್ಲಿ ನರಳಾಡುತ್ತಿತ್ತು. ಪೊಲೀಸ್ ಕಮಿಷನರ್ ಶಶಿ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಡಾಕ್ಟರ್ ಪ್ರಿಯಾಂಕ ಈ ಹತ್ಯೆಗೆ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ.